ಭಾನುವಾರ, ಜುಲೈ 31, 2011

ಜಂಗಮನ ಜಂಜಡ!!


ನಿಂತರೆ ಕೊಚ್ಚೆ ಹರಿದರೆ ತೀರ್ಥ !
ಅಪ್ಪ ನಿಂತಲ್ಲೇ ನಿಂತಿದ್ದ ನಿಶ್ಚಲವಾಗಿ ,
ನಿರುಮ್ಮಳನಾಗಿ,
ಮಳೆಯನ್ನೇ ನೆಚ್ಚಿಕೊಂಡ  ಕೆರೆಯಂತೆ !
ನನ್ನದು ನದಿಯಾಗುವ ಉಮೇದು !!
ಹಳ್ಳ ಕೊಳ್ಳ ಸೇರಿ ಹರಿದೆ,
ತಗ್ಗು ದಿಣ್ಣೆ ಹತ್ತಿ ಇಳಿದೆ ,
ಗರಿ ಬಿಚ್ಚಿಕೊಂಡು  ಗುರಿ ನೆಚ್ಚಿಕೊಂಡು.
ಕನಸುಗಳ ಹೆಣ ತೇಲಿದವು
ಅಕಾಲ ಮರಣದಿಂದ 
ಸಕಾಲದಿ ಸಾಕಾರವಾಗದೆ ,
ನನ್ನ ಚಲನ ಶೀಲತೆಯ  ಅಣಕಿಸಿತು ಅಪ್ಪನ ಜಡತೆ!
ತಳಕಾಣು ವಷ್ಟು  ನಿಚ್ಚಳ ನಾಗಿದ್ದ" ಅಪ್ಪ"
ನಾನೇ ಬಗ್ಗಡವಾದೆ !  ಕೊನೆಗೊಮ್ಮೆ
ಉಪ್ಪು ಕಡಲ ಸೇರಿ
ಉಪ್ಪಾದೆ ,ಮುಪ್ಪಾದೆ ......

ಕಾಮೆಂಟ್‌ಗಳಿಲ್ಲ: